ಚಿಬಿದ್ರೆ: ಆಗಸ್ಟ್ 1ರಂದು ಸುರಿದ ಭಾರೀ ಮಳೆಯ ಪರಿಣಾಮ ಪೆರಿಯಡ್ಕ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣಕ್ಕೆ ನೆರೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.

ದೇವಸ್ಥಾನದ ಅಂಗಣ ಸಂಪೂರ್ಣ ಜಲಾವೃತಗೊಂಡಿದ್ದು, ಭಕ್ತರು ಹಾಗೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ನೀರು ನುಗ್ಗಿದ ಪರಿಣಾಮ ದೇವಸ್ಥಾನದ ಆವರಣ ಮತ್ತು ಸೌಲಭ್ಯಗಳಿಗೆ ಹಾನಿ ಉಂಟಾಗಿದೆ.





