Breaking
4 Aug 2026, Tue

ಸಜೀಪ ಮಾಗಣೆ ಬಿಸು ಜಾತ್ರೆ: ಪ್ರಾರಂಭದ ಕೊಡಿ ಚೆಂಡು ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಬಂಟ್ವಾಳ: ಸಜೀಪ ಮಾಗಣೆ ಬಿಸು ಜಾತ್ರೆ ಅಂಗವಾಗಿ ಸಜೀಪದಲ್ಲಿ ನಡೆಯುವ ಮೂರು ದಿನಗಳ ಚೆಂಡು ಪ್ರಾರಂಭದ ಕೊಡಿ ಚೆಂಡು ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಈ ಸಾಮೂಹಿಕ ಪ್ರಾರ್ಥನೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಂತಾಡಿ ಗುತ್ತು ಗಡಿಪ್ರದಾನ ರಾಧ ಗಣೇಶ ನಾಯಕ್ ಯಾನೆ ಉಗ್ಗ ಶೆಟ್ಟಿ, ಸಜೀಪ ಗುತ್ತು ಗಡಿಪ್ರದಾನ ರಾಧಾ ಮುತ್ತಣ್ಣ ಶೆಟ್ಟಿಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ನಗ್ರೀ ಗುತ್ತು ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕಶೆಟ್ಟಿ, ನೀವೇ ಪ್ರಸಾದ ಪೂಂಜ, ಶ್ರೀಕಾಂತ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಶಂಕರ ಪೂಜಾರಿ ಯಾನೆ ಕೋಚಪೂಜಾರಿ, ಕುಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *