Breaking
22 Mar 2026, Sun

ಕವಿತ್ತ ಕರ್ಮಣಿ ಫೌಂಡೇಶನ್ ನ ಸಂಚಾಲಕ ಮಂಡಳಿಯ ಕಲಾ ವಿಭೂಷಣ ಪ್ರಶಸ್ತಿಗೆ ಧನುಷ್ ಆಚಾರ್ಯ ಆಯ್ಕೆ

ಕಾರ್ಕಳ: ಕವಿತ್ತ ಕರ್ಮಣಿ ಫೌಂಡೇಶನ್ ನ ಸಂಚಾಲಕ ಮಂಡಳಿಯು ನೀಡುವ ಕಲಾ ವಿಭೂಷಣ-2026ರ ಪ್ರಶಸ್ತಿಗೆ ಕಾರ್ಕಳದ ನೀರೆ ಬಾದಾಮಿಕಟ್ಟಿಯ ಖ್ಯಾತ ಶಿಲ್ಪ ಕಲಾವಿದರಾದ ಧನುಷ್ ಕವಿತ್ತ ಕರ್ಮಣಿ ಫೌಂಡೇಶನ್ ನ ಸಂಚಾಲಕ ಮಂಡಳಿಯ ಕಲಾ ವಿಭೂಷಣ ಪ್ರಶಸ್ತಿಗೆ ಧನುಷ್ ಆಚಾರ್ಯ ಆಯ್ಕೆ ಅವರು ಆಯ್ಕೆಯಾಗಿದ್ದಾರೆ.

ಅವರು ಸಾಹಿತ್ಯ, ಭಾಷೆ, ನೆಲ-ಜಲ ಸಂರಕ್ಷಣೆ, ಸಂಸ್ಕೃತಿ, ಸಂಗೀತ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ, ಸಾಧನೆ, ಜ್ಞಾನ ಮತ್ತು ಸಮರ್ಪಣೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಜನವರಿ 25 ರಂದು ಕವಿತ್ತ ಕರ್ಮಣಿ ಫೌಂಡೇಶನ್ (ರಿ), ನಾಗರಮುನ್ನೋಳಿ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಪ್ರದಾನ ಮಾಡಲಾಗುವುದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *