ಬಂಟ್ವಾಳ: ಮುಗುಳಿಯ ಸಜೀಪ ಮುನ್ನೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿಯ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಪುಣ್ಯಹ ಪಂಚಗವ್ಯ ಗಣ ಹೋಮ, ಪವಮಾನ ಸೂಕ್ತ ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆಯು ನೆರವೇರಿತು.
ಈ ಪೂಜೆಯನ್ನು ಸಜೀಪ ಮಾಗ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರಿತಾಯ, ಅರ್ಚಕ ಕೃಷ್ಣ ಭಟ್, ಸಮಿತಿ ಸದಸ್ಯರಾದ ಹರಿಪ್ರಸಾದ್ ಭಂಡಾರಿ, ಎನ್.ಕೆ .ಶಿವ , ಶ್ರೀನಿವಾಸ ನಾಯಕ್ , ಕಾವ್ಯಶ್ರೀ, ರಾಜೇಶ್ ಪೂಜಾರಿ, ಕವಿತಾ, ಧನಂಜಯ ಶೆಟ್ಟಿ ಪರಾರಿ ಗುತ್ತು, ರವೀಂದ್ರ ಕಂಬಳಿ ಹರೀಶ್ ಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಧಾರ್ಮಿಕ ಪೂಜೆ ನಂತರ ಭಕ್ತರಿಗೆ ಅನ್ನದಾನ ವ್ಯವಸ್ಥೆಯೂ ನೆರವೇರಿಸಲಾಯಿತು. ಊರವರು ಹಾಗೂ ಕುಟುಂಬದವರು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.




