ಬಂಟ್ವಾಳ: ಜವನೆರ್ ದೇವಸ ಭಜರಂಗದಳ ಸಿದ್ಧಕಟ್ಟೆ ಪದಾಧಿಕಾರಿಗಳು ದಿ.ದುರ್ಗಾ ಪ್ರಸಾದ್ ಆಚಾರ್ಯ ಅವರ ಪ್ರಯುಕ್ತ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಿದರು.


ಈ ಸಂದರ್ಭದಲ್ಲಿ ಭಜರಂಗ ದಳ ಸಿದ್ಧಕಟ್ಟೆ ಸಂಚಾಲಕರಾದ ನಿತಿನ್ ಪೂಜಾರಿ, ದೀಕ್ಷಿತ್ ಅಮೀನ್, ಸಂದೀಪ್ ಕೋಟ್ಯಾನ್, ದೀಕ್ಷಿತ್ ಪೂಜಾರಿ, ಪ್ರಶಾಂತ್ ಆಚಾರ್ಯ, ಮಹೇಶ್ ಆಚಾರ್ಯ, ಅಭಿಜಿತ್ ಪೂಜಾರಿ, ಅನುಶ್ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಸ್ಥೆಗೆ ಸಹಕರಿಸಿದ ಎಲ್ಲರಿಗೂ ಶ್ರೀ ದೇವರು ಆಯುಷ್ಯ, ಆರೋಗ್ಯ ಭಾಗ್ಯವನ್ನು ಕರುಣಿಸಲೆಂದು ವಿಜೇತ ಶಾಲಾ ಮಕ್ಕಳು ಪ್ರಾರ್ಥಿಸಿದರು.




