Breaking
22 Mar 2026, Sun

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತಿಗೊಂಡ ಅಶೋಕ್ ಕುಮಾರ್ ಗೆ ಅದ್ಧೂರಿ ಸ್ವಾಗತ

ಬೆಳ್ತಂಗಡಿ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಗೊಂಡು ಹುಟ್ಟೂರಿಗೆ ಆಗಮಿಸಿದ ಲಾಯಿಲ ಗ್ರಾಮದ ವಿವೇಕಾನಂದ ನಗರದ ನಿವಾಸಿ ಹೆಮ್ಮೆಯ ಯೋಧರಾದ ಅಶೋಕ್ ಕುಮಾರ್ ರವರನ್ನು ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಇವರು 23-09-2003ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಬೆಂಗಳೂರು, ಜಮ್ಮು, ಪಟ್ನಾಕೋಟ್, ಕೊಲ್ಕತ್ತ, ಅಸ್ಸಾಂ, ರಾಜಸ್ತಾನ ಮತ್ತು ಪುಣೆಯಲ್ಲಿ ಒಟ್ಟು 22 ವರ್ಷಗಳ ಕಾಲ ಭಾರತಾಂಬೆಯ ಸೇವೆಯನ್ನು ಸಲ್ಲಿಸಿ ಇದೀಗ ಸೇವಾ ನಿವೃತ್ತಿಯನ್ನು ಹೊಂದಿದ್ದಾರೆ.

ಈ ಸಂದರ್ಭ ಶಾಸಕ ಹರೀಶ್ ಪೂಂಜ, ಮೋಹನ್ ಕಲ್ಮಂಜ, ಮಾಜಿ ಸೈನಿಕ ತಂಗಚ್ಚನ್, ಯುವ ವೇದಿಕೆ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಮತ್ತು ಪದಾಧಿಕಾರಿಗಳು, ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಲಾಯಿಲ, ಸದಸ್ಯರಾದ ಪುರುಷೋತ್ತಮ್, ಅರವಿಂದ, ಮಹೇಶ್, ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ ಪದಾಧಿಕಾರಿಗಳು, ಅಶೋಕ್ ಕುಮಾರ್ ರವರ ತಂದೆ ಕೃಷ್ಣಪ್ಪ ಗೌಡ, ತಾಯಿ ವಾರಿಜ, ಪತ್ನಿ ಶಶಿಕಲಾ, ಮಕ್ಕಳಾದ ಸಾಕ್ಷಿ, ಸಾತ್ವಿಕ್ ಬಂಧುಮಿತ್ರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *