ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳದಲ್ಲಿ ನವರಾತ್ರಿ ಪರ್ವಕಾಲದ ಸಾಮೂಹಿಕ ಮಂತ್ರ ಪಠಣ ಇಂದು (ಸೆ . 22) ನಡೆಯಿತು.
ಈ ಪರ್ವಕಾಲದಲ್ಲಿ ಊರವರು ಹಾಗೂ ಕುಟುಂಬದವರು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿಶಂಕರ ಮೈಯ್ಯ , ಎಂ ಜಯರಾಮಮಯ್ಯ, ಪ್ರಶಾಂತ ಮೈಯ್ಯ, ಶಾಂತರಾಮ ರಾವ್, ಚಂದ್ರಮೋಹನ ರಾವ್, ಅಜಿತ್ ಹೊಳ್ಳ, ಶಿವಪ್ರಸಾದ್ ಕಾರಂತ, ವಿಶಾಲ್ ಹೆಗಡೆ, ಅರ್ಚಕ ಅನಂತ ಹೆಬ್ಬಾರ್, ಶ್ರೀದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಭಾಕರ ಸೋಮಯಾಜಿ, ಕೆ ನರೇಶ್ ಹೊಳ್ಳ, ಎಂ ಜಗದೀಶ ಹೊಳ್ಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




