ಬೆಳ್ತಂಗಡಿ: ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿ ವಿಡಿಯೋ ವೈರಲ್ ಮಾಡಿದ ಪ್ರಕರಣದ ವಿಚಾರಣೆಗೆ ಲಾಯರ್ ಜಗದೀಶ್ ಅವರು ಆ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಠಾಣೆಗೆ ಹಾಜರಾಗಲು ಜೀವ ಭಯ ಕಾಡುತ್ತಿದ್ದು, ಪೊಲೀಸ್ ಭದ್ರತೆಗಾಗಿ ಲಾಯರ್ ಜಗದೀಶ್ ವಿನಂತಿ ಮಾಡಿದ್ದರು.
ಈ ನಿಟ್ಟಿನಲ್ಲಿ ಇಂದು ಮಧ್ಯಾಹ್ನ 1.45ಕ್ಕೆ ಇಬ್ಬರು ಪೊಲೀಸರ ಜೊತೆ ಜಗದೀಶ್ ಠಾಣೆಗೆ ಹಾಜರಾಗಿದ್ದು,ವಿಚಾರಣೆ ನಡೆಯುತ್ತಿದೆ.



