ರಸ್ತೆಯ ಮೇಲೆ ಉರುಳಿ ಬಿದ್ದ ಮರ: ಧನೂಪೂಜೆ ಶೌರ್ಯ ಘಟಕದ ತಂಡದಿಂದ ಮರ ತೆರವು

ಬಂಟ್ವಾಳ: ವಿಪರೀತ ಗಾಳಿ ಮಳೆಗೆ ಬೃಹತ್ 4 ಮರಗಳು ರಸ್ತೆಗೆ‌ ಉರುಳಿ ಬಿದ್ದು ‌ರಸ್ತೆ‌ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ನಡೆದಿದೆ ಧನುಪೂಜೆ ಎಂಬಲ್ಲಿ ನಡೆದಿದೆ.

ವಿಚಾರ ತಿಳಿದು ಘಟನಾ ಸ್ಥಳಕ್ಕೆ ಧರ್ಮಸ್ಥಳ ಶೌರ್ಯ ಧನೂಪೂಜೆ ಘಟಕದ ಸದಸ್ಯರು ಆಗಮಿಸಿ ರಸ್ತೆಗೆ ಬಿದ್ದ ಮರವನ್ನು ಕಡಿದು ತೆರವುಗೊಳಿಸುವ ಕಾಯ೯ವನ್ನು ಶುಕ್ರವಾರ ಮಾಡಿದರು.

ಈ ಕಾಯ೯ದಲ್ಲಿ ಘಟಕದ ಪ್ರತಿನಿಧಿ ಜಗದೀಶ್ ಆಚಾರ್ಯ,ಸದಸ್ಯರಾದ ಪ್ರಮೋದ್ ಆಚಾರ್ಯ, ದಿನೇಶ್ ಆಚಾರ್ಯ, ಗಣೇಶ ಆಚಾರ್ಯ ,ಪ್ರಶಾಂತ್ ಆಚಾರ್ಯ, ಪ್ರಶಾಂತ್ ಧನೂಪೂಜೆ, ಸ್ಥಳೀಯರಾದ ‌ವಸಂತ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *