ಬಂಟ್ವಾಳ : ತಾಲೂಕು ವೀರಕಂಭ ಗ್ರಾಮದ ಬಪ್ಪಹಿತ್ತಿಲು ನಿವಾಸಿ ಶೇಖರ ಪೂಜಾರಿ (53) ಹೃದಯಾಘಾತ ದಿಂದ ಇಂದು (ಜು. 25) ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಇವರು ಬೇಕರಿ ಉದ್ಯಮ ನಡೆಸುತ್ತಿದ್ದು, ಇವರ ಪತ್ನಿ ವಿಜಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಕಂಭ ಒಕ್ಕೂಟದ ಸೇವಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೃತರು ಪತ್ನಿ , ಪುತ್ರ, ಪುತ್ರಿಯನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.



