ಬಂಟ್ವಾಳ: ತಾಲೂಕಿನ ಕೊಯಿಲ ಗ್ರಾಮದ ಕರ್ಪೆಯ ನಿವಾಸಿ ಕ್ಯಾನ್ಸರ್ ಪೀಡಿತ ಬಾಲಕಿ ಮನಸ್ವಿ ಕರ್ಪೆ ಈಕೆಯ ಚಿಕಿತ್ಸೆಗಾಗಿ ರೂ. 25 ಸಾವಿರ ಮೊತ್ತದ ಸಹಾಯಧನವನ್ನು ಬಬ್ಬರ್ಯಬೈಲು ದೈವಸ್ಥಾನ ಸೇವಾ ಸಮಿತಿ ವತಿಯಿಂದ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಹರ್ಷೇಂದ್ರ ಹೆಗ್ಡೆ, ಹರಿಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ್, ಶಾಲಿನಿ ಶೆಟ್ಟಿ, ದಾಮೋದರ ಬಂಗೇರ, ಗಂಗಾಧರ ಪಿಲ್ಕಾಜೆ, ಜನಾರ್ದನ ಪಿಲ್ಕಾಜೆ, ರಾಜೇಶ ಪಟ್ರಾಡಿ, ನಾಗರಾಜ ಶೆಟ್ಟಿ ಕರ್ಪೆ, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ ಮತ್ತಿತರರು ಉಪಸ್ಥಿತರಿದ್ದರು.



