ದ.ಕ : ಜಿಲ್ಲೆಯಾದ್ಯಾಂತ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಹೀಗಾಗಿ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ವಿದ್ಯುತ್ ತಂತಿ ಕಡಿತವಾದರೆ ಅಥವಾ ವಿದ್ಯುತ್ ಕಂಬ ಧರೆಗುರುಳಿದರೆ ತಕ್ಷಣವೇ ಈ ಕೆಳಗೆ ಕೊಟ್ಟಿರುವ ನಂಬರ್ ಗೆ ಕರೆ ಮಾಡಬೇಕೆಂದು ಮೆಸ್ಕಾಂ ಮಂಗಳೂರು ವೃತ್ತದ ವಿಭಾಗಗಳ ತಾಲೂಕು ವ್ಯಾಪ್ತಿಯ 24/7 ಸೇವಾ ಕೇಂದ್ರ ತಿಳಿಸಿದೆ.




