Breaking
23 Jun 2025, Mon

ಕರ್ನಾಟಕ ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಇಲ್ಲ- ರಾಜ್ಯದ ಪೋಲಿಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಕ್ಕೆ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಪ್ರಭಾಕರ ಪ್ರಭು

ಬಂಟ್ವಾಳ : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸಿದ ಕಾಂಗ್ರೆಸ್ ಮುಖಂಡ ಸಚಿವ ಪ್ರಿಯಾಂಕ ಖರ್ಗೆಯವರನ್ನು ಉಲ್ಲೇಖ ಮಾಡುತ್ತಾ ವಿಧಾನ ಪರಿಷತ್ತ್ ನ ವಿರೋಧ ಪಕ್ಷದ ನಾಯಕ ಹಾಗೂ ಪ.ಜಾತಿ ಸಮುದಾಯಗಳ ಪ್ರಬಲ ನಾಯಕರಾಗಿರುವ ಛಲವಾದಿ ನಾರಾಯಣ ಸ್ವಾಮಿಯವರು ಆಡಿದ ವ್ಯಂಗ್ಯದ ಗಾದೆಯ ಮಾತುಗಳಿಗೆ ಪ್ರತಿಕಾರವಾಗಿ ಸಚಿವರ ಬೆಂಬಲಿಗರೆನ್ನಲ್ಲಾದ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ಪಕ್ಷದ ನಾಯಕರಿಗೆ ಧಿಕ್ಕಾರ ಕೂಗಿ ,ಹಲ್ಲೆ ಮಾಡಿ ಚಿತ್ತಾಪುರದ ಅತಿಥಿ ಗೃಹದಲ್ಲಿ ಸುಮಾರು 4-5′ ಗಂಟೆಗಳ ಕಾಲ ದಿಗ್ಬಂದನಕ್ಕೆ ಒಳಪಡಿಸಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಕೆಟ್ಟ ಕ್ರೂರಿತನದ ಘಟನೆಯಾಗಿದ್ದು, ಕರ್ನಾಟಕದ ರಾಜಕಾರಣಕ್ಕೆ ನಾಚಿಕೆ ಪಡುವಂತಹ ಸಂಗತಿಯಾಗಿದೆ.

ಪ್ರಜಾ ಪ್ರಭುತ್ವ ವ್ಯವಸ್ಥೆಯಡಿಯಲ್ಲಿ ರಾಜಕೀಯ ಪಕ್ಷಗಳ ನಾಯಕರುಗಳು ಒಬ್ಬರಿಗೊಬ್ಬರು ಟೀಕೆ ಮಾಡುವುದು ,ನಿಂದಿಸುವುದು ಹಾಗೂ ಆರೋಪ ಹೊರಿಸುವುದು ಸರ್ವೇ ಸಾಮಾನ್ಯ ವಿಷಯವಾಗಿರುತ್ತದೆ . ಈ ನಿಟ್ಟಿನಲ್ಲಿ ಒಬ್ಬರ ಆರೋಪಕ್ಕೆ ದ್ವೇಷ ಸಾದಿಸುವುದರಿಂದ ಆ ರಾಜಕೀಯ ನಾಯಕನ ಅಹಂಕಾರದ ಮತ್ತು ಹೇಡಿತನದ ಸ್ವಭಾವ ಪ್ರಕಟಗೊಂಡಿರುತ್ತದೆ.

ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅದೆಷ್ಟೋ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಎಷ್ಟು ಎಷ್ಟು ಬಾರಿ ಹೀನಾಯವಾಗಿ ನಿಂದಿಸಿರುವುದು, ಆರೋಪ ಹೋರಿಸಿರುವುದು ರಾಜ್ಯದ ಸರ್ವ ಪಕ್ಷದ ನಾಯಕರಿಗೆ ಮತ್ತು ಪ್ರಜ್ಞಾವಂತ ನಾಗರಿಕರಿಗೆ ತಿಳಿದಿರುವ ವಿಚಾರವಾಗಿದೆ.ಟೀಕೆಗಳಿಗೆ ಪ್ರತಿ ಟೀಕಿಸಿವುದು ಹಾಗೂ ಆರೋಪಗಳಿಗೆ ಪ್ರತ್ಯ್ತಾರೋಪಗಳಿಂದ ಉತ್ತರ ಕೊಡಬೇಕು ವಿನಾಃ ಈ ರೀತಿಯಾಗಿ ಬೆದರಿಸುವ ಕ್ರಮ ಯೋಗ್ಯ ರಾಜಕಾರಣಿಗಳಿಗೆ ಸೂಕ್ತವಲ್ಲ. ಈ ರೀತಿಯಲ್ಲಿ ಕರ್ನಾಟಕದಲ್ಲಿ ಆಡಳಿತರೂಢ ಕಾಂಗ್ರೆಸ್ ಸರಕಾರ
ವಿರೋಧ ಪಕ್ಷದ ಪ್ರಮುಖರಿಗೆ ಮತ್ತು ಕಾರ್ಯಕರ್ತರ ಮೇಲೆ ತನ್ನ ಪೋಲಿಸ್ ಇಲಾಖೆಯ ಅಧಿಕಾರಿಗಳಿಂದ ಕಿರುಕುಳ ಮತ್ತು ಅನಾವಶ್ಯಕವಾಗಿ ರಾಜ್ಯದ ಹಲವೆಡೆ ಗಳಲ್ಲಿ ಹಲವಾರು ದೂರು ದಾಖಲಿಸಿರುವುದು ಕೆಲವು ಪ್ರಕರಣಗಳಲ್ಲಿ ಕಂಡುಬಂದಿರುತ್ತದೆ.

ರಾಜ್ಯದ ವಿರೋಧ ಪಕ್ಷದ ನಾಯಕರಿಗೆ ಹಾಗೂ ಶಾಸಕರಿಗೆ ಪೋಲಿಸ್ ರಕ್ಷಣೆ ಇಲ್ಲದಿದ್ದಾಗ ಜನಸಾಮಾನ್ಯರ ಗತಿ ಯಾವ ದಿಕ್ಕಿನತ್ತ ಸಾಗಬಹುದು ಎಂದು ಸಾಮಾನ್ಯ ಜನರಲ್ಲಿ ಆತಂಕದ ಭಯದ ವಾತಾವರಣ ಸೃಷ್ಟಿಯಾಗಿದೆ .

ಈ ಎಲ್ಲಾ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಸೂಕ್ತವಾದ ನಿರ್ದೇಶನ ನೀಡಿ ರಾಜ್ಯದಲ್ಲಿರುವ ಸರ್ವ ಪಕ್ಷದ ನಾಯಕರಿಗೆ ,ಶಾಸಕರಿಗೆ ಮತ್ತು ಜನಸಾಮಾನ್ಯರಿಗೆ ಅನಾವಶ್ಯಕವಾಗಿ ತೊಂದರೆ ಹಾಗೂ ಪ್ರಕರಣಗಳನ್ನು ದಾಖಲು ಮಾಡುವುದನ್ನು ತಪ್ಪಿಸಿ ಪೋಲಿಸ್ ಇಲಾಖೆಯ ಘನತೆ ,ಗೌರವ ಕಾಪಾಡಿಕೊಳ್ಳುವಂತೆ ಸೂಚಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಭಾರತ ಸರಕಾರದ ಗೃಹ ಸಚಿವರಾದ ಅಮಿತ್ ಷಾ ರವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *