ಬಂಟ್ವಾಳ: ಅಧಿವಕ್ತಾ ಪರಿಷತ್ ದಕ್ಷಿಣ ಪ್ರಾಂತ ಮಂಗಳೂರು ಘಟಕ ಮತ್ತು ಬಂಟ್ವಾಳ ಘಟಕದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಇಂದು (ಏ. 28) ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮ ಅರ್ಕುಲ ಫರಿಂಗಿಪೇಟೆಯಲ್ಲಿ ಅಗತ್ಯ ದಿನಸಿ ಅಕ್ಕಿ ನೀಡಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂತ ಅಧ್ಯಕ್ಷರು ಗುರುಪ್ರಸಾದ್ ಶೆಟ್ಟಿ ಮಂಗಳೂರು, ಜಿಲ್ಲಾ ಉಪಾಧ್ಯಕ್ಷರು ಉಮಾ ಏನ್ ಸೋಮಯಾಜಿ, ಅಕ್ಷಯ್ ರಾವ್ ಬೆಳ್ತಂಗಡಿ, ಮಂಗಳೂರು ಘಟಕ ಅಧ್ಯಕ್ಷರು ಆಶಾ ಪಿ ರೈ, ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀರಾಮ ಪ್ರಭು. ಉಪಾಧ್ಯಕ್ಷರು ಶ್ರೀಮತಿ ಉಷಾ, ಜಿಲ್ಲಾ ಸದಸ್ಯರು ವೀರೇಂದ್ರ M ಸಿದ್ಧಕಟ್ಟೆ ಉಪಸ್ಥಿತರಿದ್ದರು.




