ಬಂಟ್ವಾಳ: ಸಾಮೂಹಿಕ ಶ್ರೀ ಗಾಯತ್ರಿ ಜಪ ಅನುಷ್ಠಾನ ರುದ್ರ ಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಸರಣಿ ಕಾರ್ಯಕ್ರಮದ ಎರಡನೇ ಆವೃತ್ತಿ ಯಲ್ಲಿ ರುದ್ರ ಪಠಣ, ಪುರುಷ ಸೂಕ್ತ, ಶ್ರೀ ಸೂಕ್ತ, ಗಣಪತಿ ಸೂಕ್ತ, ಗಾಯತ್ರಿ ಅಂಗನ್ಯಾಸ, ಕರ ನ್ಯಾಸ, ಯುಕ್ತ ಏಕ ಶೃತಿ ಜಪತರ್ಪಣ ನಡೆಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಕೆ ರಾಜರಾಮ ಐತಾಳ, ರವಿಶಂಕರ ಮಯ್ಯ, ಎ. ಎಂ ಶ್ರೀನಿವಾಸ ಹೊಳ್ಳ, ಶಾಂತರಾಮ ರಾವ್, ಜನಾರ್ಧನಮಯ್ಯ, ಧನೇಶ್ವರ ರಾವ್, ಕೆ ರಮೇಶ ಹೊಳ್ಳ, ವಿಶಾಲ ಹೆಗಡೆ, ಶ್ರೀನಿಧಿ, ರಾಮಚಂದ್ರಮಯ್ಯ, ನವೀನ ರಾವ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.




