ಬಂಟ್ವಾಳ: ತುಡರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳದ 112ನೇ ಸೇವಾ ಯೋಜನೆಯ ಅಂಗವಾಗಿ, ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವ ಉಡುಪಿ ಕೇಳಾರ್ಕಳ್ ಗರಡಿ ಮಜಲು ನಿವಾಸಿ ರಕ್ಷಿತ್ ನಾಯಕ್ ಅವರ ಚಿಕಿತ್ಸೆಗೆ ನೆರವು ನೀಡಲಾಯಿತು.

ಮಾ. 22 ರಂದು ಬಿ.ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಟ್ರಸ್ಟ್ನ ಸೇವಾ ಮಾಣಿಕ್ಯರ ಸಮ್ಮುಖದಲ್ಲಿ ₹15,000 ಮೊತ್ತವನ್ನು ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು.








