ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ ತಾಲೂಕು, ಕಣಿಯೂರು ವಲಯದ ಉರುವಾಲು ಗ್ರಾಮದ ಕಾರಿಂಜ ಶ್ರೀ ವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2.50 ಲಕ್ಷದ ಡಿ.ಡಿ ವಿತರಣೆಯನ್ನು ಜಿಲ್ಲಾ ನಿರ್ದೇಶಕರಾದ ದಿನೇಶ್.ಡಿ ಹಾಗೂ ಯೋಜನಾಧಿಕಾರಿವರಾದ ಅಶೋಕ್ ಅವರು ಹಸ್ತಾಂತರ ಮಾಡಿದರು.

ಈ ಸಂಧರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಯೋಗೀಶ್ ಪೂಜಾರಿ ಕಡ್ತಿಲ, ಕಾರ್ಯಾಧ್ಯಕ್ಷರು ಸುನಿಲ್ ಅಣವು , ಜೀರ್ಣೋಧಾರ ಸಮಿತಿ ಅಧ್ಯಕ್ಷರು ದಾಸಪ್ಪ ಗೌಡ ಕೋಡಿಯಡ್ಕ, ಆಡಳಿತ ಸಮಿತಿ ಅಧ್ಯಕ್ಷರು ಕೊರಗಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಯಶವಂತ್, ಜನದೀಶ್ ಶೆಟ್ಟಿ ಮೈರಾ ಕರಾಯ, ವಿಠಲ ಸಾಲ್ಯಾನ್, ಕೃಷ್ಣಪ್ರಸಾದ್, ನವಜೀವನ ಸಮಿತಿ ರಮೇಶ್, ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್, ಮೋಹನ ಶೆಟ್ಟಿ, ವಲಯದ ಮೇಲ್ವಿಚಾರಕರಾದ ಶಿಲ್ಪಾ, ಸೇವಾ ಪ್ರತಿನಿಧಿಗಳಾದ ಸೀತಾರಾಮ ಆಳ್ವ, ಸವಿತಾ ಹಾಗೂ ಜೀರ್ಣೋದ್ದಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಮತ್ತು ಊರಿನ ನಮಸ್ತರು ಉಪಸ್ಥಿತರಿದ್ದರು.








