Breaking
23 Mar 2026, Mon

ಸಂಗಬೆಟ್ಟು ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಸಂಗಬೆಟ್ಟು ಗ್ರಾಮದ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಶ್ರೀ ಮಹಾಕಾಳಿ, ಶ್ರೀ ಬ್ರಹ್ಮ ಮುಗೇರ ದೈವಗಳು ಮತ್ತು ಪರಿವಾರ ದೈವಗಳ ಹಾಗೂ ಕೊರಗಜ್ಜ ದೈವದ ವರ್ಷಾವಧಿ ನೇಮೋತ್ಸವವು ಜ. 16 ರಿಂದ ಜ. 19 ರ ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ ನಾಯಕ್ ಕಿನ್ನಾಜೆ, ಗೌರವ ಅಧ್ಯಕ್ಷ ಭುಜಬಲಿ ಕಂಬಳಿ, ಪ್ರಧಾನ ಕಾರ್ಯದರ್ಶಿ ಶ್ರೀಧರ ಮುಗೇರ, ಗುರಿಕಾರರಾದ ಭಾಸ್ಕರ ಪೂಜಾರಿ ಅಲಕ್ಕೆ ಮೇಗಿನಮನೆ, ಮುಗೇರ ಸಮಾಜದ ಗುರಿಕಾರ ನೋಣಯ ಮುಗೇರ, ಮಹಿಳಾ ಸಮಿತಿ ಅಧ್ಯಕ್ಷೆ ರಂಜಿನಿ ದಿವಾಕರ್, ಕೊರಗಜ್ಜ ಬೆಳ್ಳಿ ಮುಟ್ಟಾಳೆ ಸಮರ್ಪಣೆ ಅಧ್ಯಕ್ಷರಾದ ಸಂತೋಷ ಕುಮಾರ್ ಚೌಟ, ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ ಗುರಿಗದ್ದೆ ಪದಾಧಿಕಾರಿಗಳಾದ ಮಹಾಬಲ ಪೂಜಾರಿ, ರತ್ನಕಾರ ಪೂಜಾರಿ, ವಾಮನ ಬುಣ್ಣನ್ ಕರ್ಪೆ, ಭೋಜ ಪೂಜಾರಿ,ವಿನೋದ್ ಪೂಜಾರಿ,ಸತೀಶ್ ಮುಗೇರ, ಶಂಕರ ಪೂಜಾರಿ,ಶೇಖರ ಮುಗೇರ, ವಾಸು ಮುಗೇರ ಕರ್ಪೆ,ನೇತ್ರಾವತಿ, ವಿರಮ್ಮ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *