ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಗುರುವಾಯನಕೆರೆಯ ಶಶಿರಾಜ್ ಶೆಟ್ಟಿಗೆ ಎಸ್ಐಟಿ ನೋಟೀಸ್ ನೀಡಿದೆ.

ಈ ನಿಟ್ಟಿನಲ್ಲಿ ಇಂದು ಶಶಿರಾಜ್ ಶೆಟ್ಟಿಯವರು ವಿಚಾರಣೆಗೆ ಆಗಮಿಸಿದ್ದಾರೆ.
2014ರಿಂದ 2016ರವರೆಗೆ 3 ವರ್ಷ ಆಂಬುಲೆನ್ಸ್ ಹೊಂದಿದ್ದ ಶಶಿರಾಜ್ ಶೆಟ್ಟಿಯವರ ಆಂಬ್ಯುಲೆನ್ಸ್ ನಲ್ಲಿ ಕೆಲ ಶವಗಳ ಸಾಗಾಟ ನಡೆಸಲಾಗಿರುವ ಕಾರಣಕ್ಕೆ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ ತಿಳಿದುಬಂದಿದೆ.




