ಉಜಿರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ನಗ -ನಗದು ದೋಚಿ ಪರಾರಿಯಾದ ಘಟನೆ ಅ.9 ರಂದು ಉಜಿರೆಯ ಅರಳಿ ಬಳಿ ನಡೆದಿದೆ.
ಬೆಟ್ಟು ಮನೆಯ ಅರಳಿ ನಿವಾಸಿ ಮಹಾಬಲ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ.

ಮಹಾಬಲ ಅವರು ಬೆಳಗ್ಗೆ ಎಂದಿನಂತೆ ಕೆಲಸ ಹೋಗಿದ್ದಾರೆ. ಈ ವೇಳೆ ಕಳ್ಳರು ಮನೆಯ ಪಕ್ಕಾಸು ತೆಗೆದು ಮನೆಯ ಒಳನುಗ್ಗಿ ಕಪಾಟಿನಲ್ಲಿದ್ದ ರೂ. 10, 000 ನಗದು ಹಾಗೂ 50ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




