ಡೆಂಜರಡ್ಕದಲ್ಲಿ ಗಾಳಿ ಮಳೆಗೆ ಹಟ್ಟಿ ಮೇಲೆ ಬಿದ್ದ ಮಾವಿನ ಮರ: ದನಗಳು ಅಪಾಯದಿಂದ ಪಾರು

ಬಂಟ್ವಾಳ : ತಾಲೂಕಿನ ಎಲಿಯನಡುಗೋಡು ಪಂಚಾಯತ್ ವ್ಯಾಪ್ತಿಯ ಡೆಂಜರಡ್ಕ ಎಂಬಲ್ಲಿ ಚಂದ್ರಯ್ಯ ಆಚಾರ್ಯ ಎಂಬವರ ಮನೆಗೆ ತಾಗಿಕೊಂಡಿರುವ ದನದ ಹಟ್ಟಿಗೆ ಮಾವಿನ ಮರ ಬಿದ್ದು ಹಟ್ಟಿ ಸಂಪೂರ್ಣವಾಗಿ ಜಖಂಗೊಂಡ ಘಟನೆ ಜು.27 ರಂದು ಬೆಳಿಗ್ಗೆ ನಡೆದಿದೆ.

ಕೊಟ್ಟಿಗೆಯಲ್ಲಿದ್ದ ದನಗಳು ಅಪಾಯದಿಂದ ಪಾರಾಗಿದ್ದು ಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *