ಮಂಗಳೂರು : ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಮುಖ ಪ್ರತಿಭೆ, ನ್ಯಾಯವಾದಿ ರಾಜಶ್ರೀ ಜೆ. ಪೂಜಾರಿ ಅವರು ಇಂದು (ಜು.25) ವಿಧಿವಶರಾಗಿದ್ದಾರೆ.
ಬರಹಗಾರ್ತಿ, ಸಾಹಿತಿ, ನಿರೂಪಕಿ ಹೀಗೆ ನಾನಾ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ರಾಜಶ್ರೀ ಸಕ್ರಿಯವಾಗಿದ್ದು, ತನ್ನ ಸೌಮ್ಯ ಸ್ವಭಾವದಿಂದ ಬಹಳಷ್ಟು ಮಂದಿಗೆ ಆಪ್ತರಾಗಿದ್ದರು.

ಅವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ.



