ನವದೆಹಲಿ : ಭಾರತೀಯ ಎರಡನೇ ಗಗನಯಾತ್ರಿ ಶುಭಾಂಶು ತಂಡ ತೆರಳಬೇಕಿದ್ದ ಬಾಹ್ಯಾಕಾಶ ಯಾನ ಆಕ್ಸಿಯಮ್-4 ಮುಂದೂಡಿಕೆಯಾಗಿದೆ.

ಇಂದು ಭಾರತೀಯ ಕಾಲಮಾನ ಪ್ರಕಾರ 5.30 ಕ್ಕೆ ಹೊರಡಬೇಕ್ಕಿತ್ತು ಆದರೆ ಕೆಲವು ತಾಂತ್ರಿಕ ಕಾರಣದಿಂದ ಈ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಸ್ಪೇಸ್ಎಕ್ಸ್ ಕಂಪನಿಯು, ಉಡಾವಣೆಗೆ ಮೊದಲು ನಡೆಸಿದ ಪೋಸ್ಟ್-ಸ್ಟ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆಯ ಸಮಯದಲ್ಲಿ ದ್ರವ ಆಮ್ಲಜನಕದಲ್ಲಿ ಸೋರಿಕೆ ಕಂಡುಬಂದಿದೆ ಎಂದು ಹೇಳಿದೆ, ಈ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

