ಬಂಟ್ವಾಳ: ಶ್ರೀ ವಿಶ್ವನಾಥ ರೈ ಇವರು ತಾ/30/05/25 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಶ್ರೀಯುತರು ಪುತ್ತೂರು ಸರ್ವೆ, ನೇರಳಕಟ್ಟೆ,ಅನಂತಾಡಿ ಸರಕಾರಿ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ಅನಂತಾಡಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಜನಾನುರಾಗಿ ಪರೋಪಕಾರಿಯಾಗಿ ಜೀವನ ನಡೆಸುತ್ತಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದಿರು.

ಪುತ್ರರಾದ ಶಶಿಧರ್ ರೈ ಹಾಗೂ ಬಿ.ಸಿ. ರೋಡಿನ ಪ್ರಸಿದ್ಧ ದಂತ ವೈದ್ಯರಾದ ಮುರಳೀಧರ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
