Breaking
24 Aug 2026, Mon

ಶ್ರೀ ಗಣೇಶ ಮಂದಿರ, ಗಣೇಶನಗರ, ಗೋಳ್ತ ಮಜಲು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ವತಿಯಿಂದ ಸ್ವಚ್ಛತಾ ಶ್ರಮದಾನ

ಕಲ್ಲಡ್ಕ : ಶ್ರೀ ಗಣೇಶ ಮಂದಿರದ ಗಣೇಶನಗರ, ಗೋಳ್ತಮಜಲು ವತಿಯಿಂದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ಸಹಕಾರದೊಂದಿಗೆ ಸ್ವಚ್ಛತಾ ಶ್ರಮದಾನ ಆಗಸ್ಟ್ 23 ನೇ ರವಿವಾರ ನಡೆಯಿತು.


ಶ್ರೀ ಗಣೇಶ ಮಂದಿರದಲ್ಲಿ ಗಣೇಶೋತ್ಸವದ ನಿಮಿತ್ತ ಪೂಜಿಸಲ್ಪಡುವ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಸಾಗುವ ರಸ್ತೆ ಬದಿಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಶ್ರಮದಾನ ಮಾಡಲಾಯಿತು.


ಶ್ರೀ ಗಣೇಶ ಮಂದಿರ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಹಾಗೂ ಶೌರ್ಯ ತಂಡದ ಸದಸ್ಯರುಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *