Breaking
21 Aug 2026, Fri

ಬಂಟ್ವಾಳ: ತಡೆಗೋಡೆ ಕುಸಿದು ಹಟ್ಟಿ ಹಾನಿ; ಕಳಪೆ ಕಾಮಗಾರಿ ಆರೋಪ

ಬಂಟ್ವಾಳ: ತಾಲೂಕಿನ ಕುರ್ಯಾಳ ಸಮೀಪದ ಬಂಡಸಾಲೆ–ಪಾಲೆದಗುರಿ ರಸ್ತೆ ನಡುವಿನ ಮಲ್ಲಿಮೊಗರು ಎಂಬಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ತಡೆಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಸ್ಥಳೀಯ ನಿವಾಸಿ ವಿಜಯಲಕ್ಷ್ಮಿ ಸಾಮಾನಿ ಅವರ ಹಟ್ಟಿ ಸಂಪೂರ್ಣ ಹಾನಿಗೀಡಾಗಿದೆ.

ತಡೆಗೋಡೆಯ ಕಾಮಗಾರಿ ಕಳಪೆಯಾಗಿದ್ದರಿಂದಲೇ ಮಳೆಗೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಡೆಗೋಡೆ ಕುಸಿತದಿಂದ ಹಟ್ಟಿಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *