ಉಡುಪಿ : ಮೀನುಗಾರಿಕೆ ಮುಗಿಸಿ ಹಿಂತಿರುಗುತ್ತಿದ್ದ ಆಳ ಸಮುದ್ರ ಮೀನುಗಾರಿಕೆ ದೋಣಿಯೊಂದು ಮುಳುಗಡೆಯಾದ ಘಟನೆ ಮಲ್ಪೆ ಸಮುದ್ರದಲ್ಲಿ ನಡೆದಿದೆ.

ಬಡನಿಡಿಯೂರಿನ ರಾಜು ಪಿ ಮೆಂಡನ್ ಅವರ ಒಡೆತನದ ಯಶಸ್ವಿ ದೋಣಿಯಲ್ಲಿ ಫೈಬರ್ ಹಲ್ ಬಿರುಕು ಬಿಟ್ಟ ಕಾರಣ ನೀರು ಒಳಗೆ ನುಗ್ಗಿ ದೋಣಿ ಮುಳುಗಡೆಯಾಗಿದೆ.
ಸದ್ಯ ದೋಣಿಯಲ್ಲಿದ್ದ ಟ್ಯಾಂಡೆಲ್ ಮತ್ತು ಇತರ ಐದು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.





