ಮಂಗಳೂರು: ಕಾರೊಂದು ಹೊತ್ತಿ ಉರಿದ ಘಟನೆ ಮಂಗಳೂರು ನಗರದ ನಂತೂರು ಜಂಕ್ಷನ್ ನಲ್ಲಿ ನ.14 ರಂದು ಮಧ್ಯಾಹ್ನದ ವೇಳೆ ನಡೆದಿದೆ.

ಬೆಂಗಳೂರು ಆರ್ ಟಿ ಓ ನೋಂದಣಿಯ ಬಿಳಿ ಬಣ್ಣದ ಕಾರಿನಲ್ಲಿ ದಾರಿ ಮಧ್ಯೆ ಬೆಂಕಿ ಕಾಣಿಸಿಕೊಂಡಿದೆ.ಕಾರು ಹೊತ್ತಿ ಉರಿಯುತ್ತಿರುವಾಗ ಡೈನೇಜ್ ಸಕ್ಕಿಂಗ್ ವಾಹನದಲ್ಲಿದ್ದ ನೀರಿನಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗಿದೆ.
ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.





