Breaking
23 Mar 2026, Mon

ಕೆಬಿಎಂಕೆ ವತಿಯಿಂದ ಲಯನ್ ಕೆ. ವಸಂತ ರಾವ್‌ಗೆ ಸನ್ಮಾನ

ಮಂಗಳೂರು: ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ನಿಕಟ ಪೂರ್ವ ಅಧ್ಯಕ್ಷರು, ದ.ಕ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಉಪಾಧ್ಯಕ್ಷರು, ಲಯನ್ ಕೆ ವಸಂತ ರಾವ್ ಅವರಿಗೆ ‌2025 ದ. ಕ ರಾಜ್ಯೋತ್ಸವದ ಜಿಲ್ಲಾ ಆಚರಣೆಯ ದಿನ ಸನ್ಮಾನ ದೊರೆತ ಪ್ರಯುಕ್ತ ಕೆಬಿಎಂಕೆ ಪರವಾಗಿ ಕಾರ್ಯಕಾರಿ ಸಭೆಯಲ್ಲಿ ‌ಸನ್ಮಾನಿಸಲಾಯಿತು.

ಬಿಇಎಂ ಸ್ಕೂಲ್ ಕಂಪಂವ್ಡ್ ಕಾರ್‌ಸ್ಟ್ರೀಟ್ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸನ್ಮಾನಿಸಿದ ಎಸ್ ಎಲ್ ಶೇಟ್ ಡೈಮಂಡ್ಸ್ ಇದರ ಮಾಲಕರು ಕೆಬಿಎಂಕೆ ಆಹ್ವಾನಿತ ಸದಸ್ಯರಾದ ಪ್ರಶಾಂತ ಶೇಟ್ ಮಾತನಾಡಿ ಭಾಷೆಗೆ ಸೇವೆ ಮಾಡಿದರೆ ಹಣ, ಸಂಪತ್ತು ಮತ್ತು ಹೆಸರು ಬರುವುದಿಲ್ಲ ಬದಲಾಗಿ ತಾಯಿಯ ಸೇವೆ ಮಾಡಿದ ಆತ್ಮ ತೃಪ್ತಿ ದೊರೆಯುತ್ತದೆ. ಭಿನ್ನ ಭಿನ್ನ ಆಲೋಚನೆಗಳು ಇರುವ ಜನರು ಒಟ್ಟಾಗಿ ಮಾಡುವ ಕೆಲಸವನ್ನು ಏಕ ಉದ್ದೇಶವಾದ ಮಾತೃಭಾಷೆ ಪ್ರೀತಿಗೆ ಸೀಮಿತಗೊಳಿಸುವ ಕೆಲಸ ಆಗಬೇಕು ಎಂದರು.

ಕೆಬಿಎಂಕೆ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ ಹಿರಿಯ ವಸಂತ ರಾವ್ ಪಾದರಸದ ಚಲನೆ ಮತ್ತು ನಿಖರವಾಗಿ ಕೆಲಸಮಾಡುವ ವಿಧಾನ ನಾವೆಲ್ಲಾ ಅನುಸರಿಸಿ ನಡೆಯುವಂತಹ ಅಗತ್ಯ ಇದೆ ಎಂದರು.

ಸನ್ಮಾನಿತರಾದ ವಸಂತ ರಾವ್ ತನ್ನ ಬಯಸದೆ ಬಂದ ರಾಜ್ಯೋತ್ಸವ ಸನ್ಮಾನದ ಬಗ್ಗೆ ಕೆಬಿಎಂಕೆ ಮಾಡಿದ ಸೇವೆಯ ನೆನಪು ತೃಪ್ತಿ ತಂದಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೀನಾಕ್ಷಿ ಪೈ, ಹಿರಿಯರಾದ ಗೀತಾ ಸಿ‌ಣಿ, ಸುರೇಶ್ ಶೆಣೈ, ಜೂಲಿಯೆಟ್‌ ಫೆರ್ನಾಂಡೀಸ್, ಎಡೊಲ್ಫ್ ಡಿಸೋಜ, ಅರವಿಂದ್ ಶಾನ್ ಭಾಗ್ ಮತ್ತು ಶಾಂತಿ ವೆರೊನಿಕಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಲಿಸ್ಟನ್ ಡೆರಿಕ್ ಡಿಸೋಜ ವಂದಿಸಿದರು.

Leave a Reply

Your email address will not be published. Required fields are marked *