ಬಂಟ್ವಾಳ: ಶ್ರೀ ರಾಮ್ ಫ್ರೆಂಡ್ಸ್ ಅನಿಲಕಟ್ಟೆ ಇದರ ಆಶ್ರಯದಲ್ಲಿ ನಡೆಯುವ ಮೂರನೇ ವರ್ಷದ ಗೋಪೂಜೆ ಹಾಗೂ ವಾಹನಪೂಜೆ ಕಾರ್ಯಕ್ರಮವು ಅ.22 ರಂದು ಅನಿಲಕಟ್ಟೆ ಬಸ್ ಸ್ಟ್ಯಾಂಡ್ ಬಳಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಬ್ರಮಣ್ಯ ಭಟ್ ಸೇರಾಜೆ, ಸುಜಿತ್ ಭಟ್ ಅನಿಲಕ್ಕಟ್ಟೆ, ಅವಿನಾಶ್ ಭಟ್ ಸೇರಾಜೆ, ಈಶ್ವರ್ ಭಟ್ ಬದನಾಜೆ, ಈಶ್ವರ್ ಭಟ್ ಬದನಾಜೆ ಪೂರ್ಲಪ್ಪಾಡಿ, ಸಿರಿ ಕೂಡೂರು, ಅಶೋಕ್ ಕುಮಾರ್ ಶೆಟ್ಟಿ, ಕೇಶವ ಭಟ್ ಕೋಟಿಮೂಲೆ, ಷಣ್ಮುಖ ಪೂಜಾರಿ ಭಾಗವಹಿಸಲಿದ್ದಾರೆ.

ಸಮಸ್ತ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


