ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಪದ್ಮುಂಜ ಶ್ರೀ ನಾಗರಕ್ತೇಶ್ವರಿ ವೆಲ್ಡಿಂಗ್ಸ್ ಮಾಲಕ ಹರೀಶ್ ಗೌಡ ಅವರು ಸ್ಟೀಲ್ ರೈಲಿಂಗ್ಸ್ ಹಾಗೂ ನೇಮ್ ಬೋರ್ಡ್ ಅಳವಡಿಸುವ ಮೂಲಕ ಕೊಡುಗೆ ನೀಡಿದ್ದಾರೆ.

ಪಾಲನಾ ಕೇಂದ್ರದ ಅಗತ್ಯವನ್ನು ಗಮನಿಸಿ ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಹರೀಶ್ ಗೌಡ ಅವರಿಗೆ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದರು.





