Breaking
13 Aug 2025, Wed

ಜನವರಿ 19: ನಮ್ಮ ಜವನೆರ್ ಸೇವಾ ಟ್ರಸ್ಟ್ (ರಿ.) ರಾಯಿ ಇದರ ವಾರ್ಷಿಕೋತ್ಸವ

ಬಂಟ್ವಾಳ: ನಮ್ಮ ಜವನೆರ್ ಸೇವಾ ಟ್ರಸ್ಟ್ (ರಿ.) ರಾಯಿ ಇದರ ವಾರ್ಷಿಕೋತ್ಸವ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೃಹತ್ ಅರೋಗ್ಯ ಶಿಬಿರ,ಸಭಾಕಾರ್ಯಕ್ರಮ, ರಕ್ತದಾನ ಶಿಬಿರ ಹಾಗೂ ಆಧಾರ್ ನೋಂದಾವಣಿ ಮತ್ತು ತಿದ್ದುಪಡಿ ಹಾಗೂ ಸಮಗ್ರ ರಕ್ಷಣಾ ಯೋಜನೆ ಅಂಚೆ ಜನಸಂಪರ್ಕ ಅಭಿಯಾನವು ಜನವರಿ 19 ರವಿವಾರ ರಾಯಿ ಬಲಪು ಮೈದಾನದಲ್ಲಿ ನಡೆಯಲಿದೆ.

ಸಂಜೆ 6ರಿಂದ ಸಭಾಕಾರ್ಯಕ್ರಮ ಸಾಧಕರಿಗೆ ಸನ್ಮಾನ, ಪ್ರೋತ್ಸಾಹ ಧನ ವಿತರಣೆ, ಅರೋಗ್ಯ ನಿಧಿ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 8:30ರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ಮೈತಿದಿ ತುಳು ಸಾಂಸಾರಿಕ ಹಾಸ್ಯಮಯ ನಾಟಕ ನಡೆಯಲಿದೆ ಎಂದು ನಮ್ಮ ಜವನೆರ್ ಸೇವಾ ಟ್ರಸ್ಟ್ (ರಿ.) ರಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *