ಉಡುಪಿ: ಕಾರ್ಕಳದ ಮಿಯಾರ್, ಬ್ರಹ್ಮಾವರದ ಕುಂಜಾಲ್, ಕೋಟ ಪೊಲೀಸ್ ಠಾಣ ವ್ಯಾಪ್ತಿಯ ತೆಕಟ್ಟೆಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಮಳಿಗೆಗಳ ಮೇಲೆ ಉಡುಪಿ ಜಿಲ್ಲಾ ಪೊಲೀಸರು ಅ.16 ದಾಳಿ ನಡೆಸಿದ್ದಾರೆ.

ಬಳಿಕ ಅಕ್ರಮ ಹಾಗೂ ಅಪಯಕಾರಿ ಪಟಾಕಿಯನ್ನು ಮುಟ್ಟುಗೊಲು ಹಾಕಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸುವವರಿಗೆ ಕೂಡ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.




