ಪುತ್ತೂರು: ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಶಾಂತಿಗೋಡು ಗ್ರಾಮದ ನೆಕ್ಲರೆ ಆನಡ್ಕದಲ್ಲಿ ನಡೆದಿದೆ.
ದಿನಗೂಲಿ ಕಾರ್ಮಿಕರಾದ ವಾಮನ ನಾಯ್ಕ (40) ಮೃತಪಟ್ಟ ದುರ್ದೈವಿ.

ಕೆಲಸ ಮುಗಿಸಿ ಮನೆಯಲ್ಲಿ ಕುಳಿತ್ತಿದ್ದ ವೇಳೆ ಸಿಡಿಲು ಬಡಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.




