ಪುತ್ತೂರು: ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಮೋದಿಜಿಯವರ ಅಭಿಮಾನಿಗಳಾದ ಹರಿಪ್ರಸಾದ್ ಹೋಟೆಲಿನ ನೌಕರರು ಬೊಳುವಾರು ಮಲರಾಯ ದೇವಸ್ಥಾನದಲ್ಲಿ ಇಂದು ( ಸೆ.17) ವಿಶೇಷ ಪೂಜೆ ಸಲ್ಲಿಸಿದರು.
ಈ ಪೂಜೆಯನ್ನು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ದೇವಸ್ಥಾನದ ಪ್ರದಾನ ಅರ್ಚಕ ಮನಮೋಹನ ಭಟ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಹರಿಪ್ರಸಾದಿನ ನೌಕರರಾದ ಯೋಗಿತ್ ಚೊಕ್ಕಾಡಿ, ವಿಶ್ವನಾಥ್ ಮಾಡವು, ಶಿವರಾಮ ಚೊಕ್ಕಾಡಿ, ಮನೋಜ್ ಕುಂದಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



