ಬಂಟ್ವಾಳ: ತಾಲೂಕಿನ ಶ್ರೀ ಮುಜಿಲ್ನಾಯ ದೈವಸ್ಧಾನ ಎಲಿಯ ಮಾಗಣೆ ಉಪ್ಪಿರ ಎಲಿಯನಡಗೋಡು ಗ್ರಾಮದ ಮುಜಿಲ್ನಾಯ ದೈವಸ್ಧಾನಕ್ಕೆ ಸಿ ಸಿ ಕ್ಯಾಮರಾ ಹಾಗೂ ಧ್ವನಿವರ್ಧಕವನ್ನು ದೇಣಿಗೆಯಾಗಿ ನೀಡಲಾಗಿದ್ದು ಇದರ ಉದ್ಘಾಟನೆಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು ನೆರವೇರಿಸಿದರು.

ಸಿಸಿ ಕ್ಯಾಮೆರಾವನ್ನು ದಿ.ಶಾರದಾ ಶೆಟ್ಟಿ ಮತ್ತು ದಿ.ಸೀತಾನಂದ ಶೆಟ್ಟಿ ಅಡಮುಗೆರು ಇವರ ಸ್ಮರಣಾರ್ಥ ವಾಗಿ ಅವರಮಕ್ಕಳು ನೀಡಿದರು. ಹಾಗೂ ಧ್ವನಿ ವರ್ಧಕವನ್ನು ದಿ.ಶರ್ವಾನಿ ಶೆಟ್ಟಿ ಮತ್ತುದಿ. ಕೆ ವಾಸು ಶೆಟ್ಟಿ ಕೂತ್ಲೋಡಿ ಇವರ ಸ್ಮರಣಾರ್ಥವಾಗಿ ಅವರ ಮಕ್ಕಳು ನೀಡಿದರು. ಕೇಬಲ್ ಹಾಗೂ ಇಂಟರ್ನೆಟ್ ಸರ್ವಿಸ್ ಸಿದ್ದಕಟ್ಟೆಯ ಮಾಲಕರಾದ ಶರಣ್ ಕರ್ಕೇರ ಮತ್ತು ಆದಿತ್ಯ ಕರ್ಕೇರ ಒರಾಕಲ್ ಅವರು ಕೇಬಲ್ ಇಂಟರ್ನೆಟ್ ಸಂಪರ್ಕವನ್ನು ನೀಡಿದರು.

ಈ ಸಂದರ್ಭ ಅಸ್ರಣ್ಣರಾದ ಕೃಷ್ಣಪ್ರಸಾದ್ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷರಾದ ಪ್ರಕಾಶ್ ಜೈನ್ ಜಂಕಲ, ಪ್ರಸ್ತುತ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಕುತ್ಲೋಡಿ, ಪದಾಧಿಕಾರಿಗಳಾದ ಜನಾರ್ದನ ಬಂಗೇರ, ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ, ಮಧುಸೂದನ್ ಸಾಲಿಯನ್, ಹರೀಶ್ ಹಿಂಗಾಣಿ , ಮೀನಾಕ್ಷಿ, ಅರುಣ ವಿಶ್ವನಾಥ ,ಸುಂದರ ಉಪ್ಪಿರ ಹಾಗೂ ಪ್ರಮುಖರಾದ ಶಾರದೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಜಗದೀಶ್ ಕೊಯ್ಲಾ , ಜಯಕರ ಶೆಟ್ಟಿ ಪರನೀರ್, ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ , ಪೂಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಸುಧೀಂದ್ರ ಶೆಟ್ಟಿ ಕಲಾಯಿದಡ್ಡ ಹಾಗೂ ಪ್ರಮುಖರಾದ ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ, ಉಮೇಶ್ ಹಿಂಗಾಣಿ, ದಾಮೋದರ್ ಪೂಜಾರಿ ದೋಟ ,ನವೀನ್ ಮಂಜಿಲ, ದಿನೇಶ್ ಶೆಟ್ಟಿಗಾರ್ ಸಿದ್ಧಕಟ್ಟೆ, ರಮೇಶ್ ಪೂಜಾರಿ ಮಜಲು, ಚಂದ್ರ ಕೊಡಂಗೆ, ಕೇಬಲ್ ಇಂಟರ್ನೆಟ್ ನೀಡಿದ ನಮ್ಮ ಕುಡ್ಲ ಚಾನೆಲ್ ನ ಶರಣ್ ಕರ್ಕೇರ , ಆದಿತ್ಯ ಕರ್ಕೇರಾ ಸ್ಥಳೀಯ ಗಣ್ಯರು ಪ್ರಮುಖರು ಉಪಸ್ಥಿತರಿದ್ದರು.




