Breaking
29 Jun 2026, Mon

ಪಂಜಿಕಲ್ಲು ಭಾಲೇಶ್ವರ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾರ್ಷಿಕ ಸೋಣ ನೇಮ

ಬಂಟ್ವಾಳ : ಪಂಜಿಕಲ್ಲು ಗ್ರಾಮದ ಭಾಲೇಶ್ವರ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಕೊಡಮಣಿತ್ತಾಯ ದೈವಕ್ಕೆ ಸಂಪ್ರದಾಯದಂತೆ ವಾರ್ಷಿಕ ‘ಸೋಣ ನೇಮವು ಸೆ. 14 ರಂದು ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಪುರೋಹಿತ ಶ್ರೀಪತಿ ಭಟ್ ಪುಂಚೋಡಿ, ಮಾಜಿ ಸಚಿವ ಬಿ. ರಮಾನಾಥ ರೈ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪ್ರಮುಖರಾದ ಬಿ. ಪದ್ಮಶೇಖರ್ ಜೈನ್, ಕೃಷ್ಣರಾಜ್ ಜೈನ್, ಕೆ. ಮಾಯಿಲಪ್ಪ ಸಾಲ್ಯಾನ್, ಜಯ ಕುಂದರ್, ವಿದ್ಯಾ ಕುಮಾರ್ ಇಂದ್ರ, ಗಣೇಶ್ ಪ್ರಭು ಭಾವಂತಬೆಟ್ಟು, ರಾಜೇಶ್ ಗೌಡ, ಕೇಶವ ಅಸಲ್ದೊಡಿ, ಕರುಣೇಂದ್ರ ಪೂಜಾರಿ, ಆನಂದ ಬುರಾಲ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *