ಬಂಟ್ವಾಳ: ಅನ್ನಪಾಡಿ ಸಜೀಪ ಮೂಡದ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಶ್ರೀ ಬಾಲ ಗಣಪತಿ ಹೋಮ ಹಾಗೂ ಶ್ರೀ ದೇವರಿಗೆ ವಿಶೇಷ ಪೂಜೆಯು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಯಶವಂತ, ದೇರಾಜೆ ಗುತ್ತು ದೇವದಾಸ ಅನ್ನಪಾಡಿ, ಸುರೇಶ್ ಪೂಜಾರಿ, ರಮೇಶ ಅನ್ನಪಾಡಿ, ಜಯಪ್ರಕಾಶ್, ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.




