Breaking
26 Mar 2026, Thu

ರಾಮಲ್ ಕಟ್ಟೆ: ಎಳೆಯರ ಬಳಗದಿಂದ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಪೂಜೇಶ್ ಆಚಾರ್ಯ ಸತತ 6ನೇ ಬಾರಿ ಮರು ಆಯ್ಕೆ

ಬಂಟ್ವಾಳ : ಎಳೆಯರ ಬಳಗ (ರಿ ) ರಾಮಲ್ ಕಟ್ಟೆ ಮತ್ತು ಎಳೆಯರ ಬಳಗ ಮಹಿಳಾ ಮಂಡಳಿ ಇದರ 2025–26ನೇ ಸಾಲಿನ ವಾರ್ಷಿಕ ಸಭೆಯು ಪೂಜೇಶ್ ರಾಮಲ್ ಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅನಿಲ್ ರಾಮಲ್ ಕಟ್ಟೆ ಸ್ವಾಗತಿಸಿ, ನವೀನ್ ರಾಮಲ್ ಕಟ್ಟೆ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

2025–26ನೇ ಸಾಲಿನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಪೂಜೇಶ್ ಆಚಾರ್ಯ ರಾಮಲ್ ಕಟ್ಟೆ ಇವರು ಸತತ 6ನೇ ಬಾರಿ ಸರ್ವನುಮತದಿಂದ ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ವಸಂತ ಅಮೀನ್, ಕೋಶಾಧಿಕಾರಿ ಅನಿಲ್ ರಾಮಲ್ ಕಟ್ಟೆ ಆಯ್ಕೆ ಯಾದರು.

ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷರು ಆರ್. ಎಸ್. ಜಯ, ಉಪಾಧ್ಯಕ್ಷರು ನವೀನ್ ರಾಮಲ್ ಕಟ್ಟೆ, ಜಗನ್ನಾಥ್ ಸಾಲಿಯಾನ್, ಗೌರವ ಸಲಹೆಗಾರರು ಪದ್ಮನಾಭ ಬೆಳ್ಚಡ, ಕ್ರೀಡಾಧ್ಯಕ್ಷರು ರತೀಶ್ ರಾಮಲ್ ಕಟ್ಟೆ, ಕ್ರೀಡಾ ಕಾರ್ಯದರ್ಶಿಗಳು ಗಣೇಶ್, ವಿನೀತ್, ಸಾಂಸ್ಕೃತಿಕ ಕಾರ್ಯದರ್ಶಿ ದೋಮ ವಳವೂರ್,

ಸಲಹೆಗಾರರು : ನೊಣಯ್ಯ ಕುಲಾಲ್ ದೇಮುಂಡೆ, ಅಶೋಕ್ ಕಲ್ಲಗುಡ್ಡೆ, ರಾಘವ ದೂಟ, ಮೋಹನ್ ದಾಸ್ ಮಣೂರು, ಸತೀಶ್ ರಾಮಲ್ ಕಟ್ಟೆ ಆಯ್ಕೆಯಾದರು.

ಭಜನಾ ಸಮಿತಿ: ಸಂಚಾಲಕ ಸಂತೋಷ್ ರಾಮಲ್ ಕಟ್ಟೆ, ಸಹ ಸಂಚಾಲಕ ಶೇಖರ್ ಭಂಡಾರಿ, ಪ್ರಸಾದ್ ರಾಮಲ್ ಕಟ್ಟೆ, ಕಾರ್ಯದರ್ಶಿ ವಸಂತಿ ಅರಬನ, ಸಹ ಕಾರ್ಯದರ್ಶಿ ಸಂಧ್ಯಾ ಸುಶೀಲ್, ಸೌಮ್ಯ ರಾಮಲ್ ಕಟ್ಟೆ, ಆಯ್ಕೆಯಾದರು.

Leave a Reply

Your email address will not be published. Required fields are marked *