ಬಂಟ್ವಾಳ: ತಾಲೂಕಿನ ಆಲದ ಪದವು ಇಲ್ಲಿನ ನೂರುಲ್ ಇಸ್ಲಾಂ ಮದರಸ & ಮಸ್ಜಿದ್ ಆಲದ ಪದವು ಇಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.
ಹಿರಿಯರಾದ ಪುತುಮೋನು ಬಸ್ತಿಕೋಡಿ ಧ್ವಜರೋಹಣ ನೆರವೇರಿಸಿದರು.

ಮಸೀದಿ ಅಧ್ಯಕ್ಷರಾದ ಹಂಝ ಬಸ್ತಿಕೋಡಿ ಮತ್ತು ಇಮಾಮ್ ರಾದ ಅಬೂಬಕ್ಕರ್ ಸಿದ್ದೀಕ್ ಮಹ್ದಾನಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಿರಾಜ್ ಬಸ್ತಿಕೋಡಿ ಕೊಶಾಧಿಕಾರಿ ಇಮ್ರಾನ್ ಬಸ್ತಿಕೋಡಿ ಹಾಗೂ ಹಾಜಿ ಅಬ್ದುಲ್ ರಹಿಮಾನ್ ಬಸೀರ್ ಪಾಲ್ಕೆ ಅಬ್ಬು ನಡಾಯಿ ಹಾಗೂ ಜಮಾತ್ ನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

ಇದೇ ವೇಳೆ ಸಿಹಿ ತಿಂಡಿ ವಿತರಣಾ ಕಾರ್ಯಕ್ರಮ ನಡೆಯಿತು.



