ಬಂಟ್ವಾಳ: ಕುದ್ಕೋಳಿಯಿಂದ ಪುಂಜಾಲಕಟ್ಟೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಆರೋಗ್ಯ ವಿಚಾರಣೆಯ ಸಲುವಾಗಿ ಕೊಂಡೊಯ್ಯುತ್ತಿದ್ದ ₹20,000 ನಗದು ಹಣವನ್ನು ಮಹಾಲಸ ಟ್ರಾವೆಲ್ಸ್ ಬಸ್ನಲ್ಲಿ ಕಳೆದುಕೊಂಡಿದ್ದರು.

ಕಳೆದುಹೋದ ಹಣವನ್ನು ಸಹಪ್ರಯಾಣಿಕ ನೈನಾಡು ನಿವಾಸಿ ಕಿರಣ್ ಎಂಬವರು ಪತ್ತೆಹಚ್ಚಿ, ಹಣವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಿರಣ್ ಅವರ ಪ್ರಾಮಾಣಿಕತೆ ಹಾಗೂ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.





