ಬಂಟ್ವಾಳ: ಆಟೋ ಚಾಲಕರ ಮಾಲಕರ ಸಂಘ (ರಿ.)ಪೊಳಲಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಿತು.
ಧ್ವಜಾರೋಹಣವನ್ನು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅರ್ಚಕರಾದ ಮಾಧವ ಭಟ್ ನೇರವೇರಿಸಿದರು.

ಈ ಸಂದರ್ಭದಲ್ಲಿ ಗೌರವ ಉಪಸ್ಥಿತಿಯಲ್ಲಿ ಶ್ರೀರಾಮಕೃಷ್ಣ ತಪೋವನದ ಪೂಜ್ಯ ಶ್ರೀವಿವೇಕಾಚೈತನ್ಯಾನಂದ ಸ್ವಾಮೀಜಿಯವರು ಇದ್ದರು.ವೆಂಕಟೇಶ್ ನಾವಡ, ಯಶವಂತ ಕೋಟ್ಯಾನ್, ವಿದ್ಯಾ ವಿಲಾಸ ಪ್ರಾಥಮಿಕ ಶಾಲಾ ಮುಖ್ಯೊಪಾಧ್ಯಾಯಿನಿ ಮಾಲಿನಿ, ವಿದ್ಯಾವಿಲಾಸ ಶಾಲೆಯ ಮಕ್ಕಳು, ಎಸ್.ಆರ್.ಹಿಂದೂ ಫ್ರೆಂಡ್ಸ್ ಪೊಳಲಿ .ಅಧ್ಯಕ್ಷರು ಮತ್ತು ಸದಸ್ಯರು, ಆಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ಮಂಜುನಾಥ ಕೋಟ್ಯಾನ್ ಮತ್ತು ಚಾಲಕರು, ಮಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.



